ಇತಿಯೋಪಿಯ
From Wikipedia
ಧ್ಯೇಯ: none | |
ರಾಷ್ಟ್ರಗೀತೆ: Wodefit Gesgeshi, Widd Innat Ityopp'ya "ಮುನ್ನಡೆ, ಪ್ರಿಯ ಮಾತೆ ಇತಿಯೋಪಿಯ" |
|
ರಾಜಧಾನಿ | ಅಡಿಸ್ ಅಬಬ |
ಅತ್ಯಂತ ದೊಡ್ಡ ನಗರ | ಅಡಿಸ್ ಅಬಬ |
ಅಧಿಕೃತ ಭಾಷೆ(ಗಳು) | ಅಮ್ಹರಿಕ್ ಭಾಷೆ |
ಸರಕಾರ | ಸಂಯುಕ್ತ ಗಣರಾಜ್ಯ1 |
- ರಾಷ್ಟ್ರಪತಿ | ಗಿರ್ಮ ವೊಲ್ಡೆ-ಜಿಯೊರ್ಗಿಸ್ |
- ಪ್ರಧಾನ ಮಂತ್ರಿ | ಮೆಲೆಸ್ ಜೆನಾವಿ |
ಸ್ಥಾಪನೆ | |
- ಸಾಂಪ್ರದಾಯಿಕ ನಂಬಿಕೆಯಲ್ಲಿ | ಸುಮಾರು ಕ್ರಿ.ಪೂ. ೯೮೦ |
- ಡ'ಮ್ಟ್ ಸಾಮ್ರಾಜ್ಯ | ಕ್ರಿ.ಪೂ. ೮ನೇ ಶತಮಾನ |
- ಅಕ್ಸುಮ್ ಸಾಮ್ರಾಜ್ಯ | ಕ್ರಿ.ಪೂ. ೧ನೇ ಶತಮಾನ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,104,300 ಚದುರ ಕಿಮಿ ; (27th) |
426,371 ಚದುರ ಮೈಲಿ | |
- ನೀರು (%) | 0.7 |
ಜನಸಂಖ್ಯೆ | |
- ೨೦೦೬ರ ಅಂದಾಜು | 75,067,000 (15th2) |
- ೧೯೯೪ರ ಜನಗಣತಿ | 53,477,265 |
- ಸಾಂದ್ರತೆ | 70 /ಚದುರ ಕಿಮಿ ; (123rd) 181 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $60.099 billion (69th) |
- ತಲಾ | $823 (173rd) |
ಮಾನವ ಅಭಿವೃದ್ಧಿ ಸೂಚಿಕ (2004) | 0.371 (170th) – low |
ಕರೆನ್ಸಿ | ಬಿರ್ (ETB ) |
ಕಾಲಮಾನ | EAT (UTC+3) |
- Summer (DST) | not observed (UTC+3) |
Internet TLD | .et |
ದೂರವಾಣಿ ಕೋಡ್ | +251 |
1 Ostensibly Ethiopia is a democracy, but has a dominant-party system led by the Ethiopian People's Revolutionary Democratic Front. 2 Rank based on 2005 population estimate by the United Nations. |
ಇತಿಯೋಪಿಯ ಆಫ್ರಿಕ ಖಂಡದ ಉತ್ತರಕ್ಕೆ ಇರುವ ಒಂದು ಪ್ರಾಚೀನ ದೇಶ. ಮೊದಲಿಗೆ ಇದು ಅಬಿಸಿನಿಯಾ ಎಂದು ಕರೆಯಲ್ಪಡುತಿತ್ತು.
[ಬದಲಾಯಿಸಿ] ಇತಿಹಾಸ
ಇತಿಯೋಪಿಯದ ಇತಿಹಾಸ ಬಹು ಪ್ರಾಚೀನವಾದುದು.ಇದರ ಸಾಮ್ರಾಟರು ಬೈಬಲ್ ನಲ್ಲಿ ಉಲ್ಲೇಖಿಸಲ್ಪಟ್ಟ ಪ್ರಸಿದ್ಡ ಸಾಮ್ರಾಟ ಸೊಲೊಮನ್ನ ವಂಶಸ್ಥರು ಎಂದು ಗುರುತಿಸಿಕೊಂಡಿದ್ದರು. ಸಾಮ್ರಾಟರು ಹಾಗೂ ರಾಜರುಗಳು ಈ ದೇಶವನ್ನು ಸುಮಾರು ೨೦೦೦ ವರ್ಷಗಳಿಗೂ ಅಧಿಕ ಕಾಲ ಆಳಿದರು. ೧೯೭೪ರಲ್ಲಿ ಸಶಸ್ತ್ರ ಮಾರ್ಕಿಸ್ಟರು ಇತಿಯೋಪಿಯದ ಕೊನೆಯ ಸಾಮ್ರಟ ಹೈಲೆ ಸೆಲ್ಲಸಿಯನ್ನು ಪದಚ್ಯುತಗೊಳಿಸುವವರೆಗೂ ಇವರ ಆಡಳಿತ ಮುಂದುವರೆದಿತ್ತು.ನಂತರ ಈ ಹೊಸ ಸರ್ಕಾರಕ್ಕೂ ವಿರೋಧ ಬೆಳೆದು ೧೯೯೧ ರಲ್ಲಿ ಮಾರ್ಕಿಸ್ಟರು ಅಧಿಕಾರ ತೊರೆದು, ಹಲವಾರು ಗುಂಪುಗಳನ್ನೊಳಗೊಂಡ "ಇತಿಯೋಪಿಯ ಕ್ರಾಂತಿಕಾರಿ ಪ್ರಜಾಸತ್ತಾತ್ಮಕ ರಂಗ" ಅಧಿಕಾರವಹಿಸಿಕೊಂಡಿತು. ೧೯೯೩ರಲ್ಲಿ ಈ ದೇಶದ ಒಂದು ಪ್ರಾಂತವಾದ ಎರಿಟ್ರಿಯ ಸ್ವಾತಂತ್ರ್ಯ ಘೋಷಿಸಿಕೊಂಡಿತು. ೧೯೯೫ ರಲ್ಲಿ ಹೊಸ ಸಂವಿಧಾನದೊಂದಿಗೆ ಸಂಯುಕ್ತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊಸ ಸರಕಾರದ ರಚನೆಯಾಯಿತು. ಹೊಸ ಸಂವಿಧಾನ ದೇಶವನ್ನು ಒಂಬತ್ತು ಬುಡಕಟ್ಟು ಪ್ರಾಂತಗಳನ್ನಾಗಿ ವಿಭಜಿಸಿತು. ೧೯೯೮ ರಲ್ಲಿ ಎರಿಟ್ರಿಯ ಹಾಗೂ ಇತಿಯೋಪಿಯ ನಡುವೆ ಗಡಿವಿವಾದ ಉಂಟಾಗಿ ಶೀತಲ ಸಮರವಾಗಿ ಎರಡೂಕಡೆ ಸಾವಿರಾರು ಜನ ಕೊಲ್ಲಲ್ಪಟ್ಟರು.