ಯು.ಆರ್.ರಾವ್
From Wikipedia
ಉಡುಪಿ ರಾಮಚಂದ್ರರಾವ ಇವರು ಉಡುಪಿ ಸಮೀಪದ ಮಾರ್ಪಳ್ಳಿಯಲ್ಲಿ ೧೯೩೨ ಮಾರ್ಚ ೧೦ರಂದು ಜನಿಸಿದರು. ಇವರ ತಾಯಿ ಕೃಷ್ಣವೇಣೀಯಮ್ಮ ; ತಂದೆ ಲಕ್ಷ್ಮೀನಾರಾಯಣರಾವ. ಇವರದು ಕೃಷಿಕ ಕುಟುಂಬ.
ರಾಮಚಂದ್ರರಾಯರು ಉಡುಪಿ, ಅನಂತಪುರ, ಮದ್ರಾಸ, ಬನಾರಸ ಮೊದಲಾದ ಸ್ಥಳಗಳಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದರು. ವಿಕ್ರಮ ಸಾರಾಭಾಯಿಯವರ[1] ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಮೆಸಾಚುಸೆಟ್ಸ್ದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು , ೧೯೬೬ರಲ್ಲಿ ಭಾರತಕ್ಕೆ ಮರಳಿದರು.
ಮೊದಲಿಗೆ ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿಯಲ್ಲಿ ಪ್ರಾಧ್ಯಾಪಕರಾಗಿದ್ದ ಯು.ಆರ್. ರಾವ ಆಬಳಿಕ “ಇಸ್ರೊ’’ದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನು ಸೇರಿಸಿದ ಕೀರ್ತಿ ಯು.ಆರ್.ರಾವ್ ಅವರದು.
ಯು.ಆರ್.ರಾವ್ ಅವರ ಅಂತರಿಕ್ಷ ತಂತ್ರಜ್ಞಾನ ಕೃತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ೧೯೭೬ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದಲ್ಲದೆ ಇವರಿಗೆ ಭಟ್ನಾಗರ ಪ್ರಶಸ್ತಿ. ರವೀಂದ್ರ ಪುರಸ್ಕಾರ, ‘ನಾಸಾ’ ಪುರಸ್ಕಾರ, ಗಗಾರಿನ್ ಪದಕ ಮೊದಲಾದ ಗೌರವ ದೊರಕಿವೆ. ಮೈಸೂರು ವಿಶ್ವವಿದ್ಯಾನಿಲಯ ಸೇರಿ ಅನೇಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಲಭಿಸಿವೆ.
ಯು.ಆರ್.ರಾವ ಇವರು ಶಾಂತಿಗಾಗಿ ಅಂತರಿಕ್ಷ ಯೋಜನೆಯ ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.