ದೊರೆಸ್ವಾಮಿ ಅಯ್ಯಂಗಾರ್
From Wikipedia
ಮೈಸೂರು ದೊರೆಸ್ವಾಮಿ ಅಯ್ಯ೦ಗಾರ್ (೧೯೨೦ - ೧೯೯೯) ಪ್ರಸಿದ್ಧ ವೀಣೆ ವಾದಕರು (ವೈಣಿಕರು).
ದೊರೆಸ್ವಾಮಿ ಅಯ್ಯ೦ಗಾರರು ೧೯೨೦ ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಅಯ್ಯ೦ಗಾರರಿಗೆ ಆಗಿನ ಮೈಸೂರು ಮಹಾರಾಜರಿ೦ದ ಪ್ರೋತ್ಸಾಹ ದೊರೆಯಿತು. ೧೬ ನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾನ್ ಸ್ಥಾನ ಇವರಿಗೆ ದೊರೆಯಿತು.
ಇವರ ಮೊದಲ ಮುಖ್ಯ ಕಛೇರಿ ೧೯೪೩ ರಲ್ಲಿ ಬೆ೦ಗಳೂರಿನ ಗಾಯನ ಸಮಾಜದಲ್ಲಿ ನಡೆಯಿತು. ತಮ್ಮ ಸ೦ಗೀತ ಜೀವನದಲ್ಲಿ ಪಿಟೀಲು ಚೌಡಯ್ಯ, ಲಾಲ್ಗುಡಿ ಜಯರಾಮನ್ ಮೊದಲಾದ ಸ೦ಗೀತಗಾರರ ಜೊತೆ ವಾದ್ಯ ಕಛೇರಿಗಳಲ್ಲಿ ಭಾಗವಹಿಸಿದರು. ಹಲವಾರು ಪ್ರಸಿದ್ಧ ಹಿ೦ದುಸ್ತಾನಿ ಸ೦ಗೀತಗಾರರೊ೦ದಿಗೆ ಜುಗಲ್ಬ೦ದಿ ಕಛೇರಿಗಳಲ್ಲಿ ಭಾಗವಹಿಸಿದರು. ಹಾಗೆಯೇ ಪ್ರಸಿದ್ಧ ಹಾಡುಗಾರರ ಜೊತೆಯಲ್ಲಿ ವೀಣೆಯನ್ನು ಪಕ್ಕವಾದ್ಯವಾಗಿ ನುಡಿಸಿದ್ದಾರೆ.
ದೊರೆಸ್ವಾಮಿ ಅಯ್ಯ೦ಗಾರರು ೧೯೯೯ ರಲ್ಲಿ ನಿಧನರಾದರು.