ಜಗದೀಶ್ಚಂದ್ರ ಬೋಸ್
From Wikipedia
ಜಗದೀಶ್ಚಂದ್ರ ಬೋಸ್ ಭಾರತದ ಪ್ರಸಿದ್ಧ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆೆ ಸಾಬೀತು ಮಾಡಿ ತೊರಿಸಿದವರು. ರೇಡಿಯೊ ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು.
[ಬದಲಾಯಿಸಿ] ಜೀವನ
ನವೆಂಬರ್ ೩೦ ೧೮೫೮ ಮೈಮನಸಿಂಗ್ (ಈಗಿನ ಬಾಂಗ್ಲಾದೇಶ) ಎಂಬ ಊರಿನಲ್ಲಿ ಜನಿಸಿದರು. ಕಲ್ಕತ್ತೆಯ ಸೇಂಟ್ ಕ್ಸೇವಿಯರ್ ಶಾಲೆ ಹಾಗು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಒದಿ, ಬಿ ಎ ಒದಲು ಲಂಡನ್ನಿಗೆ ತೆರಳಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ ೧೮೮೪ರಲ್ಲಿ ಕಲ್ಕತ್ತೆಗೆ ಮರಳಿದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೋದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬೋಸರು, 'ರೆಸ್ಪಾನ್ಸ್ ಇನ್ ದಿ ಲಿವಿಂಗ್ ಎಂಡ್ ನಾನ್ ಲಿವಿಂಗ್"(೧೯೦೨) ಹಾಗು "ದಿ ನರ್ವಸ್ ಮ್ಯಕಾನಿಸಮ್ ಆಫ್ ಪ್ಲಾಂಟ್ಸ್"(೧೯೨೬) ಎಂಬ ಎರಡು ಪ್ರಸಿದ್ಧ ಪುಸ್ತಕಗಳನ್ನು ರಚಿಸಿದರು. ಬೋಸರು ೧೯೧೭ರಲ್ಲಿ ಬೋಸ್ ಇನ್ಸ್ಟಿಟ್ಯುಟ್ ಸಂಸ್ಥೆಯನ್ನು ಕಲ್ಕತ್ತದಲ್ಲಿ ಸ್ತಾಪಿಸಿದರು. ೧೯೨೦ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ನವೆಂಬರ್ ೨೩, ೧೯೩೭ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.
[ಬದಲಾಯಿಸಿ] ಸಾಧನೆಗಳು
- ನೈಟ್ ಹುಡ್ ಪ್ರಶಸ್ತಿ ೧೯೧೬
- ಫೆಲೊ ಆಫ್ ರಾಯಲ್ ಸೊಸೈಟಿ ಸದಸ್ಯತನ ೧೯೨೦