ಆರ್.ಎನ್.ಜಯಗೋಪಾಲ್
From Wikipedia
ಆರ್.ಎನ್. ಜಯಗೋಪಾಲ್ ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ ಆರ್.ನಾಗೇಂದ್ರರಾಯರು ಇವರ ತಂದೆ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ಣಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ ಆರ್.ಎನ್.ಸುದರ್ಶನ್ ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಆರ್.ಎನ್. ಜಯಗೋಪಾಲ್ ಅವರು ೧೯೬೮ರಲ್ಲಿ ಧೂಮಕೇತು ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ ಅವಳ ಅಂತರಂಗ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೀವನದಿ ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಆರ್.ಎನ್.ಜಯಗೋಪಾಲ್ ರಚಿಸಿರುವ ನೀರಿನಲ್ಲಿ ಅಲೆಯ ಉಂಗುರ - ಚಿತ್ರ:ಬೇಡಿ ಬಂದವಳು. ಬೆಳ್ಳಿಮೋಡದ ಆಚೆಯಿಂದ- ಚಿತ್ರ :ಬೆಳ್ಳಿ ಮೋಡ, ನೀಬಂದು ನಿಂತಾಗ - ಚಿತ್ರ: ಕಸ್ತೂರಿ ನಿವಾಸ, ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ:ಗೆಜ್ಜೆ ಪೂಜೆ ಮುಂತಾದ ಹಾಡುಗಳು ಜನಮಾನಸದಲ್ಲಿ ಶಾಶ್ವರ ಸ್ಥಾನವನ್ನು ಗಳಿಸಿಕೊಂಡಿವೆ.
[ಬದಲಾಯಿಸಿ] ಗೀತೆರಚನೆ ಒದಗಿಸಿರುವ ಚಿತ್ರಗಳು
- ಚಕ್ರತೀರ್ಥ
- ವಿಜಯನಗರದ ವೀರಪುತ್ರ
- ಸೀತಾ
- ಪುನರ್ಜನ್ಮ
- ಮಧುರ ಸಂಗಮ
- ಕಪ್ಪು ಬಿಳುಪು
- ಬಾಳುಜೇನು
- ನಮ್ಮ ಮಕ್ಕಳು
- ನಾಂದಿ
- ಮರೆಯದ ಹಾಡು
- ಹಸಿರುತೋರಣ
- ನಾ ಮೆಚ್ಚಿದ ಹುಡುಗ
- ಹಣ್ಣೆಲೆ ಚಿಗುರಿದಾಗ
- ಗೆಜ್ಜೆಪೂಜೆ
- ಪರೋಪಕಾರಿ
- ಬೆಳ್ಳಿಮೋಡ
- ಉಪಾಸನೆ
- ಸಂಪತ್ತಿಗೆ ಸವಾಲ್
- ಸಿಪಾಯಿರಾಮು
- ಬಂಗಾರದ ಮನುಷ್ಯ
- ಎಡಕಲ್ಲು ಗುಡ್ಡದ ಮೇಲೆ
- ಪಲ್ಲವಿ ಅನುಪಲ್ಲವಿ
- ಟೋನಿ
- ಚಿನ್ನಾ ನಿನ್ನ ಮುದ್ದಾಡುವೆ
- ಚಿರಂಜೀವಿ
- ಪ್ರೇಮಕ್ಕು ಪರ್ಮಿಟ್ಟೆ
- ಸಾಹಸ ಸಿಂಹ
- ಅರ್ಚನ
- ಕಿಲಾಡಿ ಕಿಟ್ಟು
- ರಾಜ ನನ್ನ ರಾಜ
- ಸವತಿಯ ನೆರಳು
- ನೀ ಬರೆದ ಕಾದಂಬರಿ
- ಜೀವನದಿ
- ಅಂಜದ ಗಂಡು
- ಹೃದಯ ಪಲ್ಲವಿ
- ಜನನಾಯಕ
- ಸ್ವಾಭಿಮಾನ
- ವಸಂತ ಲಕ್ಷ್ಮಿ
- ಬೇಡಿ ಬಂದವಳು
[ಬದಲಾಯಿಸಿ] ಆರ್.ಎನ್.ಜೆ. ನಿರ್ದೇಶನದ ಚಲನಚಿತ್ರಗಳು
ವರ್ಷ | ಚಿತ್ರ |
---|---|
೧೯೬೮ | ಧೂಮಕೇತು |
೧೯೭೨ | ನಾ ಮೆಚ್ಚಿದ ಹುಡುಗ |
೧೯೭೩ | ಕೆಸರಿನ ಕಮಲ |
೧೯೭೯ | ಮುತ್ತು ಒಂದು ಮುತ್ತು |
೧೯೮೧ | ಮರೆಯದ ಹಾಡು |
೧೯೮೩ | ಮಕ್ಕಳೇ ದೇವರು |
೧೯೮೪ | ಅವಳ ಅಂತರಂಗ |
೧೯೮೭ | ಹೃದಯ ಪಲ್ಲವಿ |